ನವೀನತೆಯ ಕಲಿಕಾ ತತ್ವ
ರಚನೆ : ಶ್ವೇತ . ವಿ
----------------------------------
ನವಯುಗದ ಕುಲುಮೆಯ ಜ್ವಾಲೆಯು ಉಕ್ಕುತಿಹ ಕಾಲ, ಪೊಡೆಯಲ್ಲಿರುವ ಪಿಂಡಕ್ಕೆ ನವೀನತೆಯ ಎಲರ ಎರಚುವ ಕಾಲ. ಧುಮ್ಮಿಕ್ಕುವ ಮನೋರಥ ಪಡೆಯಲು, ಪಿಂಡಕ್ಕೆ ಆಡಂಬರದ ದಿವ್ಯಾಸ್ತ್ರ ಕೈಗೆ ನೀಡುವ ವಾಂಛೆ. ನವಯುಗದ ಬಿಸಿಗಾಳಿಯ ಪಥಕೆ ಸಿಕ್ಕಿ ಕಂಪಿಸಿತೆ ಮಕ್ಕಳ ಈ ಬಾಲ್ಯ, ಪರಕೀಯತೆ ಪರತಂತ್ರದ ಮೋಹ ಆಕರ್ಷಣೆಗೆ. ಮಕ್ಕಳ ಈ ಶೈಶವ್ಯವ ತರ್ಪಣ ಬಿಡುವಂತಾಯಿತೆ! ಸುಭದ್ರೆಯ ಪೊಡೆಯಲ್ಲಿನ ಅಭಿಮನ್ಯು, ವ್ಯೂಹ ಭೇದಿಸುವುದ ಕಲಿತನೆಂಬುದು ಆಧುನಿಕತೆಯ ವಾದ. ವೀರ ಮರಣವನಪ್ಪಿದರೂ ಸಂಪೂರ್ಣ ಆಯಸ್ಸು ದೊರೆಯಲಿಲ್ಲವೆಂಬುವುದೇ ವ್ಯೂಹದ ಸಾರ. ಈ ತತ್ವವನ್ನು ಒಪ್ಪದೆ, ನವತತ್ವದ ಕಲಿಕೆಗೆ ತರಗೆಲೆಗಳಾಯಿತು ನಮ್ಮ ಈ ಮಕ್ಕಳ ಬಾಲ್ಯ...
----------------------------------
ನೋಂದಣಿ ಐಡಿ : KPF-S1-5056